ಬುಧವಾರ, ಸೆಪ್ಟೆಂಬರ್ 14, 2016

ನಿರ್ಲಕ್ಷ್ಯವೊಂದೇ ಸಾಕು ಹಿಮಾಲಯದ ತಪ್ಪಲು ಭಾರತದ ಕೈ ತಪ್ಪಲು!



ಅಂತರ್ರಾಷ್ಟ್ರೀಯ ಶಕ್ತಿ ರಾಜಕೀಯದ ಚದುರಂಗದಾಟದಲ್ಲಿ ನೆರೆಹೊರೆಯ ಸಣ್ಣ ಪುಟ್ಟ ರಾಷ್ಟ್ರಗಳ ನಿರ್ಲಕ್ಷ್ಯ ವಿಶ್ವಶಕ್ತಿಗಳಿಗೂ ದುಬಾರಿಯಾಗಿಬಿಡುತ್ತದೆ.  ರಾಜಕೀಯ ವಿಷಮಸ್ಥಿತಿಯಲ್ಲಿರುವ ನೇಪಾಳಕ್ಕೆ ಚೀನಾ ಈಗಾಗಲೇ ಗಾಳ ಹಾಕಿರುವುದು ಭಾರತದ ಪಾಲಿಗೆ   ಅಂತಕನ ಆಹ್ವಾನವೇಸರಿ!
-      ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು,
ಅಲಯನ್ಸ್ ವಿಶ್ವವಿದ್ಯಾಲಯ)

-      ಪ್ರಶಾಂತ್ ಎಸ್. ಪಿ.
(ಅತಿಥಿ ಉಪನ್ಯಾಸಕರು,
ಗೋಪಾಲ್ ರಾಜು ಸರಕಾರಿ ಪ್ರಥಮ ದರ್ಜೆ ಕಾಲೇಜ್)


ಸಾಮಾಜಿಕ, ಸಾಂಸ್ಕ್ರತಿಕ, ಭೌಗೋಳಿಕ ಅಂಶಗಳು ಭಾರತ ಮತ್ತು ನೇಪಾಳದ ಸಂಬಂಧಗಳನ್ನು ಬಹಳ ಪ್ರಾಚೀನ ಕಾಲದಿಂದಲೂ ಪೋಷಿಸಿಕೊಂಡು ಬಂದಿದೆ. ಹಿಮಾಲಯದ ತಪ್ಪಲಿನಲ್ಲಿರುವ ನೇಪಾಳ ಭಾರತದ ಪಾಲಿಗೆ ಬರಿ ನೆರೆಯರಾಷ್ಟ್ರವಾಗಿ ಉಳಿಯದೆ, ಕಾಲಾಂತರದಲ್ಲಿ ಭಾರತದ ವಿದೇಶಾಂಗ ನೀತಿಯ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಎಲ್ಲ ಸಂಬಂಧಗಳಿಗೆ ಕಲಶಪ್ರಾಯವೆಂಬಂತೆ 1950 ರಲ್ಲಿ ನಡೆದ ಶಾಂತಿ ಮತ್ತು ಮಿತೃತ್ವ ಒಪ್ಪಂದ ಭಾರತ ನೇಪಾಳದಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನೇ ತೆರೆದಿಟ್ಟಿತು. ಒಪ್ಪಂದ ವ್ಯಾಪಾರ, ವ್ಯವಹಾರ ಹಾಗೂ ಇತರ ಆರ್ಥಿಕ ಚಟುವಟಿಕೆಗಳಲ್ಲಿ ಪರಸ್ಪರ ರಾಷ್ಟ್ರದ ಜನರು ಮುಕ್ತವಾಗಿ ಪಾಲ್ಗೊಳ್ಳುವಂಥ ಅವಕಾಶ ಕಲ್ಪಿಸಿತು. ಒಪ್ಪಂದದಮತ್ತೊಂದು ವಿಶೇಷತೆ ಎಂದರೆ ಪಾಸ್ ಪೊರ್ಟ್ ಅಥವಾ ವೀಸಾ ಇಲ್ಲದೆಯೆ ಪರಸ್ಪರ ರಾಷ್ಟ್ರಗಳಿಗೆ ತೆರಳಲು ಮತ್ತು ವಾಸಿಸಲು ಅನುವು ಮಾಡಿಕೊಟ್ಟಿತು. ಇದಲ್ಲದೆ ರಾಷ್ಟ್ರಗಳ ನಡುವೆ ನಡೆದ ಭದ್ರತಾ ಒಪ್ಪಂದ ಸಂಭಂದವನ್ನುಮತ್ತಷ್ಟು ಗಟ್ಟಿಗೊಳಿಸಿ ನೇಪಾಳ ಭಾರತದ ಭದ್ರತಾ ವಲಯದ ಭಾಗವೆಂದೇ ಪರಿಗಣಿಸಲಾಯಿತು. ಇದ್ದರೆ ಹೀಗಿರಬೇಕು ಎಂಬಂತಿದ್ದ ನೆರೆಹೊರೆಯ ರಾಷ್ಟ್ರಗಳ ಮಧ್ಯೆ 1970 ನಂತರದ ಬೆಳವಣಿಗೆಗಳು ಪರಸ್ಪರ ಅವಿಶ್ವಾಸಅಪನಂಬಿಕೆಗಳನ್ನು ಹುಟ್ಟುಹಾಕಿದವು. ಸಿಕ್ಕಿಂನ್ನು ತನ್ನ ಸ್ವಾಧೀನಕ್ಕೆ ಪಡೆದ ಭಾರತದ ನೀತಿಯನ್ನು ನೇಪಾಳ ಬಹಿರಂಗವಾಗಿಯೇ ಟೀಕಿಸಿದ ನೇಪಾಳ ಮುಂದಕ್ಕೂ ಭಾರತದಿಂದ ಒದಗಬಹುದಾದ ಸಂಭಾವ್ಯ ಅಪಾಯವನ್ನು ಊಹಿಸಿತ್ತು.ಮುಂದೆ ರಾಷ್ಟ್ರಗಳು ತಮ್ಮ ಮೂಗಿನ ನೇರಕ್ಕೆ ನಡೆದುಕೊಂಡು ರಾಜತಾಂತ್ರಿಕ ಸಂಬಂಧಗಳನ್ನು ಇನ್ನಷ್ಟು ಜಟಿಲಗೊಳಿಸಿಬಿಟ್ಟವು.

ಒಡೆದುಹೋದ ಭಾರತ -ನೇಪಾಳ ಸಂಬಂಧ ಹಾಗೂ ನೇಪಾಳದಲ್ಲಿ ಹೆಚ್ಚುತ್ತಿರುವ ಚೀನಾ ಪ್ರಭಾವ, ಭಾರತ-ನೇಪಾಳ ಭಾಂಧವ್ಯವನ್ನು ಮತ್ತಷ್ಟು ಒಡೆಯುತ್ತಿದೆ. ಹಾಗಂತ ಸಂಬಂಧವನ್ನು ಗಟ್ಟಿಗೊಳಿಸಲಾಗದಷ್ಟು ಜಟಿಲತೆ ಇದೆಎಂದಲ್ಲ. ಭಾರತ-ನೇಪಾಳಗಳ ಮಧ್ಯೆ ಇರುವ ಅವಿಶ್ವಾಸ, ಅಪನಂಬಿಕೆಗಳ ಜೊತೆ ಜೊತೆಗೆ ರಾಜಕೀಯ ಅಸ್ಥಿರತೆ. ಆಗಾಗೆ ಬದಲಾಗುತ್ತಿರುವ ಸರಕಾರಗಳ ಮಧ್ಯೆ ಹೊಯ್ದಾಡುತ್ತಿರುವ ವಿದೇಶಾಂಗ ನೀತಿಗಳೂ ಎರಡೂ ರಾಷ್ಟ್ರಗಳನಡುವಿನ ಕಂದಕ ಹೆಚ್ಚಿಸಿವೆ. ಇದಲ್ಲದೆ ಸರಕಾರಗಳ ಬದಲಾವಣೆಯ ಹಿಂದೆ ಭಾರತದ ಕೈವಾಡವಿದೆ ಎಂದು ನೇಪಾಳ ಅನುಮಾನಿಸುತ್ತಿರುವುದು, ಶರ್ಮಾ ಓಲಿ ಬದಲಾವಣೆಯಲ್ಲಿಯೂ ಭಾರತದ ಪಾತ್ರವಿರುವ ಬಗ್ಗೆ ಸಂಶಯವನ್ನು ವ್ಯಕ್ತಪಡಿಸಿರುವುದು, ಭಾರತ ತನ್ನ ನೆರೆಯ ರಾಷ್ಟ್ರಗಳಲ್ಲಿ ವಿಶ್ವಾಸ ಗಳಿಸಿಕೊಳ್ಳುವಲ್ಲಿ ವಿಫ಼ಲವಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ದಶಕಗಳಿಂದ ನೇಪಾಳದ ಪ್ರಥಮ ಆಯ್ಕೆಯಾಗಿದ್ದ ಭಾರತ, ಇವತ್ತಿಗೆ ನೇಪಾಳದ ಆದ್ಯತೆಯ ಪಟ್ಟಿಯಲ್ಲಿಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವುದು ವಿಪರ್ಯಾಸವೇ ಸರಿ. ಮಧ್ಯೆ ಚೀನಾ ನೇಪಾಳದಲ್ಲಿ ತೋರಿಸುತ್ತಿರುವ ಆಸಕ್ತಿಯಿಂದ ನೇಪಾಳ ಕೆರುಂಗ್ ನಿಂದ ಕಠ್ಮಂಡುವಿಗೆ ರೈಲ್ವೆ ಸಂಪರ್ಕ ವಿಸ್ತರಣೆಗೆ ಅವಕಾಶ ನೀಡುವುದರೊಂದಿಗೆಪೊಕಾರ ಮತ್ತು ಲುಂಬಿನಿವರೆಗೆ ವಿಸ್ತರಿಸಲು ಅವಕಾಶ ನೀಡಿದೆ. ಎಲ್ಲಾ ಬೆಳವಣಿಗೆಗಳು ಭಾರತ ನೇಪಾಳ ಗಡಿಗೆ ಬಹಳ ಹತ್ತಿರದಲ್ಲಿಯೇ ನಡೆಯುತ್ತಿರುವುದು ಭಾರತದ ಪಾಲಿಗೆ ಆತಂಕಕಾರಿ.

ಚೀನಾ ಮತ್ತು ನೇಪಾಳಗಳು ಸ್ವತಂತ್ರ ರಾಷ್ಟ್ರಗಳಾಗಿದ್ದು ಪರಸ್ಪರ ವ್ಯವಹಾರ ನಡೆಸಲು ಸ್ವತಂತ್ರವಾಗಿವೆ ಆದರೆ ಬೆಳವಣಿಗೆಗಳ ಹಿಂದೆ ದುರುದ್ದೇಶವಿದ್ದರೆ ಭಾರತಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಭಾರತ ತನ್ನ ನೆರೆ ರಾಷ್ಟ್ರಗಳಲ್ಲಿವಿಶ್ವಾಸಗಳಿಸಲು ವಿಫ಼ಲವಾದಲ್ಲಿ ಚೀನಾಕ್ಕೆ ಭಾರತದ ವಿರೋಧಿ ಚಟುವಟಿಕೆಗಳಿಗೆ ನೆರೆರಾಷ್ಟ್ರಗಳು ಮುಕ್ತ ವೇದಿಕೆಯಾಗಿ ಮಾರ್ಪಡಬಹುದು. ಬಾಂಗ್ಲಾವನ್ನು ಆರಂಭದಲ್ಲಿ ರಾಷ್ಟ್ರವಾಗಿ ಅಂಗೀಕರಿಸಲು ನಿರಾಕರಿಸಿದ ಚೀನಾತದನಂತರದಲ್ಲಿ ತನ್ನ ಮಿಲಿಟರಿ ಉತ್ಪನ್ನಗಳಿಗೆ ಬಾಂಗ್ಲಾವನ್ನು ಮಾರುಕಟ್ಟೆಯಗಿ ಮಾಡಿಕೊಂಡಿತ್ತು! ಇದಲ್ಲದೆ ಬಾಂಗ್ಲಾದಲ್ಲಿ ಆರು ರೈಲ್ವೆ ಯೊಜನೆಗಳಿಗೆ ಒಂಬತ್ತು ಬಿಲಿಯನ್ ಡಾಲರ್ ಹಣವನ್ನು ಕಡಿಮೆ ಬಡ್ಡಿದರದಲ್ಲಿ ನಿಡುವ ಯೊಜನೆಹಾಕಿಕೊಂಡಿದೆ ಮತ್ತು ಇದು ಢಾಕಾಗೆ ಸಂಪರ್ಕ ಕಲ್ಪಿಸುವುದರ ಜೊತೆಗೆ ಕೈಗಾರಿಕ ವಲಯ ಹಾಗೂ ಭಾರತದ ಗಡಿಯವರೆಗೆ ಸಂಪರ್ಕ ಕಲ್ಪಿಸಲಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟುಶ್ರೀಲಂಕಾವನ್ನು ಚೀನಾದ ಕಡೆಗೆ ಮುಖ ಮಾಡುವಂತೆ ಮಾಡಿತ್ತು. ಇಲ್ಲಿ ಸ್ವಾಭಾವಿಕವಾಗಿ ಏಳುವ ಪ್ರಶ್ನೆಯೆಂದರೆ ಚೀನಾಗೆ ಇರುವ ಲಾಭವೇನು? ನಾವು ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಪ್ರತಿ ಸ್ವತಂತ್ರ ರಾಷ್ಟ್ರಕ್ಕೂ ಇನ್ನೊಂದುರಾಷ್ತ್ರದೊಡನೆ ವ್ಯವಹರಿಸುವ ಸ್ವಾತಂತ್ರ್ಯವಿದೆ. ನೇಪಾಳದೊಂದಿನ ಸಂಭಂಧದಲ್ಲಿ ಅರ್ಥಿಕ ಲಾಭವಾಗದಿದ್ದರೂ ರಾಜಕೀಯ ಲಾಭ ಇದ್ದೇ ಇದೆ!

ಇತ್ತೀಚೆಗೆ ಅಂದರೆ ಜನವರಿ 2016 ರಲ್ಲಿ ಸಂವಿಧಾನ ಅಸ್ತಿತ್ವಕ್ಕೆ ಬಂದಾಗ ಹಿಂದುಳಿದ ಸಮುದಾಯವಾದ ಮಾಧೇಸಿ ಹಾಗೂ ಇತರ ಸಮುದಾಯಗಳನ್ನು ಕಡೆಗಣಿಸಿರುವುದು, ಸಂವಿಧಾನ ವಿರೋಧಿ ಹೋರಾಟಕ್ಕೆ ಎಡೆ ಮಾಡಿಕೊಟ್ಟಿದೆ.ಮಾದೇಸಿ ಹೋರಾಟಕ್ಕೆ ಭಾರತ ಬೆಂಬಲ ನೀಡಿರುವುದು ಹಾಗೂ ಇದಕ್ಕೆ ಸಂಬಂಧಿಸಿದಂತೆ ಭಾರತ ತಳೆದಿರುವ ಕಠಿಣ ನಿಲುವು ಸಂಬಂಧವನ್ನು ಮತ್ತಷ್ಟು ಹದಗೆಡಿಸಿದೆ. ಆದರೆ ಇದರಿಂದ ಭಾರತ ನೇಪಾಳದ ಜನರಿಗೆಹತ್ತಿರವಾಗುವುದರಲ್ಲಿ ಸಂಶಯವಿಲ್ಲ. ಹಾಗೆಂದ ಮಾತ್ರಕ್ಕೆ ನೇಪಾಳದಲ್ಲಿ ಸಂಪೂರ್ಣ ಭಾರತ ಪರ ಅಭಿಪ್ರಾಯವಿದೆಯೆಂದಲ್ಲ, ಅಂದರೆ ಸಂವಿಧಾನವನ್ನು ಒಪ್ಪಿಕೊಂಡವರು ಸಾಮಾನ್ಯವಾಗಿಯೇ ಭಾರತದ ನೀತಿಯನ್ನು ವಿರೋಧಿಸುತ್ತಾರೆ.ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ನೇಪಾಳದ ಸಂವಿಧಾನ ಸಭೆಯಲ್ಲಿ ಭಾಷಣ ಮಾಡುತ್ತ ಹತ್ತು ಸಾವಿರ ಕೋಟಿ ರೂ. ಅಭಿವೃದ್ಧಿಗಾಗಿ ನೀಡುವುದಾಗಿ ಘೋಷಿಸಿದರು. ಇದು ಮುರಿದಿದ್ದ ಸಂಬಂಧವನ್ನು ಬೆಸೆಯುವ ನಿರೀಕ್ಷೆಮೂಡಿಸಿತ್ತು. ಮೂಲಕ ಭಾರತ ನೇಪಾಳದ ಅಭಿವೃದ್ಧಿಗೆ ಬದ್ದವಾಗಿದೆ ಎಂಬ ಸಂದೇಶವನ್ನು ರವಾನಿಸಿತ್ತು. ಪ್ರಧಾನಿಯಾದ ಬಳಿಕ ಶರ್ಮಾ ಓಲಿ ಭಾರತ ಭೇಟಿಯೂ ಸಹ ಹೊಸ ಭರವಸೆಯನ್ನು ಮೂಡಿಸಿತ್ತು. ಅದರೆ ನಿರೀಕ್ಷೆಗಳುಮತ್ತು ಆಶಾವಾದ ಸ್ವಲ್ಪ ಸಮಯಕ್ಕಷ್ಟೇ ಸೀಮಿತವಾಗಿದ್ದು, ತದನಂತರದ ಬೆಳವಣಿಗೆಯಲ್ಲಿ ಅಪನಂಬಿಕೆ ಹೆಡೆಯೆತ್ತಿದೆ. ಗಡಿಯಲ್ಲಿ ಸರಕುಗಳ ಸಾಗಾಣಿಕೆಗೆ ಮಾಧೇಸಿ ಹೋರಾಟಗಾರರು ತಡೆಯನ್ನು ಒಡ್ದಿದ್ದಾರೆ. ಇದು ಭಾರತ ಒಡ್ಡಿರುವತಡೆ ಎಂದು ಆರೋಪಿಸಿದೆ. ಆದರೆ ಆರೋಪವನ್ನು ಭಾರತ ತಿರಸ್ಕರಿಸಿದ್ದರೂ ನೇಪಾಳ ಒಪ್ಪುತ್ತಿಲ್ಲ. ಭಾರತ ನೇಪಾಳದ ಮೇಲೆ ದಿಗ್ಬಂಧನ ಹೇರಿದೆಯೋ? ಅಥವಾ ಮಾದೇಸಿ ಹೋರಾಟಗಾರರು ಸಾಗಾಣಿಕೆಯನ್ನು ತಡೆದಿದ್ದಾರೋಎಂಬ ಪ್ರಶ್ನೆ ಭಾರತ ನೇಪಾಳ ಸಂಬಂಧಗಳನ್ನು ಅವಿಶ್ವಾಸದ ಕೂಪದೊಳಕ್ಕೆ ತಳ್ಳಿತ್ತು!

ಭಾರತ ನೇಪಾಳ ಸಂಬಂಧಗಳಲ್ಲಿ  ನೇಪಾಳಕ್ಕೆ ಭಾರತದ ಅವಶ್ಯಕತೆಯಿದೆಯೇ ಹೊರತು ಭಾರತಕಲ್ಲ ಎಂಬ ನಿಲುವನ್ನು ಹಲವರು ತಳೆದರಾದರೂ, ವಿದೇಶಾಂಗ ನೀತಿಯ ಯಶಸ್ಸು ಮತ್ತು ವೈಫಲ್ಯಗಳಲ್ಲಿ ನೆರೆಯ ಸಣ್ಣ ಪುಟ್ಟ ರಾಷ್ಟ್ರಗಳಪಾತ್ರವನ್ನು ಕಡೆಗಣಿಸುವಂತಿಲ್ಲ. ಅದರಲ್ಲೂ ನೇಪಾಳ ಚೀನಾ ಕಡೆಗೆ ಒಲವು ತೋರಿಸುತ್ತಿರುವುದು ತಿಳಿದ ಮೇಲೂ ಭಾರತ ನಿರ್ಲಕ್ಷ್ಯ ತಾಳಿದಲ್ಲಿ ಹಿಮಾಲಯದ ತಪ್ಪಲಿನ ಪುಟ್ಟ ರಾಜ್ಯ ಭಾರತದ ವಿದೇಶಾಂಗ ನೀತಿಯ ದುರಂತವಾಗಿಮಾರ್ಪಡುತ್ತದೆ . ಈಗಾಗಲೇ ಪಾಕಿಸ್ಥಾನವನ್ನು ಬಳಸಿಕೊಂಡು ತಂತ್ರ ರೂಪಿಸುತ್ತಿರುವ ಚೀನಾ ನೇಪಾಳವನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ದಕ್ಷಿಣ ಏಷ್ಯಾದಲ್ಲಿ ತನ್ನ ಅಧಿಪತ್ಯ ಸ್ಥಾಪಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.ಎರಡು ವರ್ಷಗಳ ಹಿಂದೆ 2014ರಲ್ಲಿ ಸಾರ್ಕ್ ಒಕ್ಕೂಟದ ವೀಕ್ಷಕ ರಾಷ್ಟ್ರವಾಗಿರುವ ಚೀನಾ ಖಾಯಂ ಸದಸ್ಯ ರಾಷ್ಟ್ರವಾಗುವ ನಿಟ್ಟಿನಲ್ಲಿ ನೇಪಾಳವನ್ನು ಬಳಸಿಕೊಂಡಿದ್ದನ್ನು ನಾವಿಲ್ಲಿ ಮರೆಯಲಾಗದು!

ಭಾರತದಿಂದ ದೂರಾಗಿ ಚೀನಾದತ್ತ ಮುಖ ಮಾಡಿದ್ದ ಖಡ್ಗ ಪ್ರಸಾದ್ ಓಲಿ ಇತ್ತೀಚೆಗೆ ನೇಪಾಳದಲ್ಲಿ ನಡೆದ ರಾಜಕೀಯ ಬದಲಾವಣೆಗಳಿಂದಾಗಿ ಅಧಿಕಾರ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ನಡೆದ ನಾಟಕೀಯ ಬೆಳವಣಿಗೆಯಲ್ಲಿ ನೇಪಾಳರಾಜಕೀಯದ ಮತ್ತೊಂದು ಅನೂಹ್ಯ ತಿರುವಿನೊಂದಿಗೆ ಪ್ರಧಾನಿ ಪುಷ್ಪ ಕಮಲ್ ದಹಾಲ್ ಅಂದರೆ ಪ್ರಚಂಡರವರು ನೇಪಾಳದ ಪ್ರಧಾನಿಯಾಗಿದ್ದಾರೆ. ಪ್ರಚಂಡರವರು ಭಾರತ ಹಾಗೂ ಚೀನಾಕ್ಕೆ ನಿಯೋಗವನ್ನು ಕಳಿಸುವ ಮೂಲಕ ಎರಡೂರಾಷ್ಟ್ರಗಳ ವಿಶ್ವಾಸಗಳಿಸುವ ಪ್ರಯತ್ನ ಮಾಡಿದ್ದು ಪ್ರಶಂಸನೀಯ. ಉಪ ಪ್ರಧಾನಿ ಬಿಮಲೇಂದ್ರ ನಿಧಿಯವರನ್ನೇ ಭಾರತಕ್ಕೆ ಪ್ರತಿನಿಧಿಯನ್ನಾಗಿ ಕಳುಹಿಸಿಕೊಟ್ಟಿದ್ದು ಮತ್ತು ನಿಧಿಯವರ ಭಾರತ ಭೇಟಿ ಯಶಸ್ವಿಯಾಗಿ ಭಾರತ ನೇಪಾಳಗಳುಹಳೆಯ ಬಾಂಧವ್ಯಕ್ಕೆ ಹಿಂದಿರಿಗುವ ಎಲ್ಲಾ ಲಕ್ಷಣಗಳನ್ನೂ ತೋರ್ಪಡಿಸಿದೆ. ಪ್ರಧಾನಿ ಮೋದಿ ಕೂಡ ಪ್ರಯತ್ನಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು, ಪ್ರಚಂಡ ಅಧಿಕಾರಾವಧಿಯಲ್ಲಿ ಭಾರತ ನೇಪಾಳ ಸಂಬಂಧಗಳು ಹೊಸ ಹುಮ್ಮಸ್ಸುಪಡೆದುಕೊಳ್ಳುವ ಸಾಧ್ಯತೆಗಳಿವೆ. ಒಂಬತ್ತು ತಿಂಗಳ ಬಳಿಕ ಪ್ರಚಂಡ, ಸಮ್ಮಿಶ್ರ ಸರಕಾರದ ಪಾಲುದಾರರಾದ ಶೇರ್ ಬಹದ್ದೂರ್ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದು, ಶೇರ್ ಬಹದ್ದೂರ್ ಕೂಡ ಭಾರತದ ಪರ ನಿಲುವನ್ನುಹೊಂದಿರುವುದು ಗಮನಾರ್ಹ ವಿಚಾರ. ಶೇರ್ ಬಹದ್ದೂರ್  ಹಿಂದುಸ್ತಾನ್ ಟೈಮ್ಸ್ ಗೆ ನೀಡಿರುವ ಸಂದರ್ಶನದಲ್ಲಿ ಎರಡೂ ರಾಷ್ಟ್ರಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದಾಗಿ ಹೇಳಿದ್ದಾರೆ. ಸಂವಿಧಾನದ ಬಗೆಗಿನ ಭಾರತದಕಾಳಜಿಗಳನ್ನೂ ನೇಪಾಳ ಸರಕಾರ ಸಕಾರಾತ್ಮಕ ರೀತಿಯಲ್ಲಿ ಪರಿಗಣಿಸುವ ಭರವಸೆ ವ್ಯಕ್ತಪಡಿಸಿದೆ. ಎರಡೂ ರಾಷ್ಟ್ರಗಳ ರಾಜಕೀಯ ನಾಯಕರ ಇಚ್ಚಾಶಕ್ತಿ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಕಾಯ್ದುಕೊಳ್ಳುವ ಬದ್ಧತೆಯಆಧಾರದ ಮೇಲೆ ನೇಪಾಳ-ಭಾರತದ ಭವಿಷ್ಯದ ಬಾಂಧವ್ಯ ನಿರ್ಧರಿತವಾಗಲಿದೆ.


      (This article was published in Vijaya Karnataka newspaper on 13 September 2016)







      KEERTHIRAJ (keerthiraj886@gmail.com)
      Assistant Professor
International Relations and Political Science
Alliance University, Bangalore. 













PRASHANTH S. P. (prashsp92@gmail.com)
Guest Lecturer,
Political Science
Dr. S. Gopalaraju Govt. First Grade College,
Anekal








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ